ನಮ್ಮೂರಿಗೆ ನೀ ಬಂದ ಹೊತ್ತು
ಅದು ಆ ಹೊತ್ತು ಮುಳುಗುವ ಹೊತ್ತು
ಬೀಸಿತ್ತು ಗಾಳಿ ಇನ್ನಿಲ್ಲದಷ್ಟು
ಜಡಿದಿತ್ತು ಅಡ್ಡಮಳೆ ತುಂಬಾ ಹೊತ್ತು
ತಂದಿತ್ತು ಅದು ಅದರ ಜೊತೆ ಆಲಿಕಲ್ಲನ್ನು ಹೊತ್ತು
ಮಳೆರಾಯ ಭುವಿಗೆ ಬೇಡೆಂದರೂ ಒತ್ತಿ ಒತ್ತಿ ಚುಂಬಿಸಿದಂತಿತ್ತು
ಮಗುವಂತೆ ಆಯುತ್ತಿದ್ದೆ ಆಲಿಕಲ್ಲನ್ನು
ಕೃಷ್ಣ ಕದ್ದೊಡಿದ ಹಾಗೆ ಅಂಗೈಯಲ್ಲಿ ಬೆಣ್ಣೆಯನ್ನು
ನಿನ್ನಾಟವ ನೋಡಿ ಮೊಳಕೆಯೊಡೆಯಿತು ನನ್ನಲ್ಲಿ ಶೃಂಗಾರ ಲಹರಿಯು
ಆಯ್ದು ಅವುಗಳನ್ನು ಹಾಕಬೇಕೆನಿಸಿತು ನಿನ್ನ ಮೈಗೆ ಕಚಕುಳಿಯತರಲು
ನಿನ್ನ ನಗಿಸಲು, ನಾ ನಗಲು....
ಬೇಕಂತಲೇ ನಾವಿಬ್ಬರೂ ದಾರಿಯ ತಪ್ಪಲು.....!
ಮಳೆರಾಯನ ಬಲವಂತ ನನಗೆ ಬಾರದು
ಬಂದರೂ ಬಲವಂತದ ಶೃಂಗಾರ ಮೋಜು ಕೊಡದು
ಅದಕ್ಕೆ ಕೊಂಚ ಹೊತ್ತು ನಾ ಭೂಮಿ ನೀ ಮಳೆರಾಯನಾಗು
ನಿನ್ನ “ಮೃದು ಬಲವಂತ” ಆ ರತಿ-ಮನ್ಮಥರನ್ನು ನಾಚಿಸಬಹುದು.....!
ಮನ್ಮಥನು ತನ್ನಿರುವಿಕೆ ವ್ಯರ್ಥವೆಂದು ಕಾಮಬಾಣವನ್ನೇ ಸುಟ್ಟುಹಾಕಬಹುದು.....!
No comments:
Post a Comment