ನೀನಿಲ್ಲದ ಹಾಸಿಗೆ
ಮುಳ್ಳಿನ ತೂಗುಯ್ಯಾಲೆಯಾಯಿತು
ನಾನು ಪಟ್ಟ ಪಾಡು
ಭೀಷ್ಮನಿಗಿಂತ ಅತೀಯಾಯಿತು
ನೀ ದೂರ ಹೋದಾಗ
ಸೇರಬೇಕೆನ್ನುವ ಆಸೆ
ನೀ ಬಳಿ ಸೇರಲು ಬಂದಾಗ
ಪ್ರತಿಧ್ವನಿಸುತ್ತೆ ಈ ಮನ ಇದು ಪಾಪ ಓ ಕೂಸೆ ಇದು ಪಾಪ
ಮಂಜಿನಂತೆ ಮಸುಕಾಗಿರಲು ನಮ್ಮ ಭವಿಷ್ಯ
ಏಕೆ ಈ ಎಡವುವಾಸೆ? ಏಕೆ ಈ ಎಡವುವಾಸೆ?
ಮೋಡಗಳೆಲ್ಲ ತಬ್ಬಿಕೊಂಡಿರಲು ಚಂದ್ರಮನನ್ನು
ತಪ್ಪಿ ಅದ ನಾ ನೋಡಿದಾಗ
ಮತ್ತೆ ಹಾಡಿತು ಕೋಗಿಲೆ ಮುಂದಿಟ್ಟಿತು ಅದೇ ಆಸೆ
ಛೆ, ಏನು ಹೇಳಲಿ ಮತ್ತೆ ಅದೇ ಮುಳ್ಳಿನ ಹಾಸಿಗೆ,
ಅದೇ ಭೀಷ್ಮ ಸಂಕಟ, ಅದೇ ಪಾಪ ಪ್ರಜ್ಞೆ.....!
ನೀವೇ ಹೇಳಿ ಯಾವುದು ಉಚಿತಾನುಚಿತ.....?
No comments:
Post a Comment