Total Pageviews

Monday, 10 October 2011

ಮನ ತೂಗುಯ್ಯಾಲೆ


ನೀನಿಲ್ಲದ ಹಾಸಿಗೆ
ಮುಳ್ಳಿನ ತೂಗುಯ್ಯಾಲೆಯಾಯಿತು
ನಾನು ಪಟ್ಟ ಪಾಡು
ಭೀಷ್ಮನಿಗಿಂತ ಅತೀಯಾಯಿತು

ನೀ ದೂರ ಹೋದಾಗ
ಸೇರಬೇಕೆನ್ನುವ ಆಸೆ
ನೀ ಬಳಿ ಸೇರಲು ಬಂದಾಗ
ಪ್ರತಿಧ್ವನಿಸುತ್ತೆ ಈ ಮನ ಇದು ಪಾಪ ಓ ಕೂಸೆ ಇದು ಪಾಪ
ಮಂಜಿನಂತೆ ಮಸುಕಾಗಿರಲು ನಮ್ಮ ಭವಿಷ್ಯ
ಏಕೆ ಈ ಎಡವುವಾಸೆ? ಏಕೆ ಈ ಎಡವುವಾಸೆ?

ಮೋಡಗಳೆಲ್ಲ ತಬ್ಬಿಕೊಂಡಿರಲು ಚಂದ್ರಮನನ್ನು
ತಪ್ಪಿ ಅದ ನಾ ನೋಡಿದಾಗ
ಮತ್ತೆ ಹಾಡಿತು ಕೋಗಿಲೆ ಮುಂದಿಟ್ಟಿತು ಅದೇ ಆಸೆ
ಛೆ, ಏನು ಹೇಳಲಿ ಮತ್ತೆ ಅದೇ ಮುಳ್ಳಿನ ಹಾಸಿಗೆ,
ಅದೇ ಭೀಷ್ಮ ಸಂಕಟ, ಅದೇ ಪಾಪ ಪ್ರಜ್ಞೆ.....!

ನೀವೇ ಹೇಳಿ ಯಾವುದು ಉಚಿತಾನುಚಿತ.....?


No comments:

Post a Comment