ಕ್ಲಾಸಿನ ಕೊನೆಯ ಬೆಂಚಿನ ತುದಿಯಲ್ಲಿ ಕೂತ ನಿನ್ನನು ನೋಡಿತೀ ಮನ,
ನೋಡಿದಾಕ್ಷಣವೇ ಜೀವನಪೂರ್ತಿ ದಂಡತೆತ್ತಲು ಒತ್ತಾಯ ಮಾಡಿತೀ ಮನ,
ಅದಕ್ಕೆ ನೀನು ಎದೆಗೊತ್ತಿದ ಮಣ ಭಾರದ ಪುಸ್ತಕಗಳೇ ಸಾಕ್ಷಿ.....!
ಕೂತು ಕಲ್ಲಾಯಿತೀ ಮನ,
ನಿಂತ ನೀರಾಯಿತೀ ಮನ,
ಸಾಕ್ಷಾತ್ ಸರಸ್ವತಿ ದೇವಿಯೇ ಒಲಿದು ಧರೆಗಿಳಿದು ಬಂದರೂ
ಸೌಂದರ್ಯ ಲಕ್ಷ್ಮಿಯನ್ನು ಬಿಡಲೊಲ್ಲದ ಈ ಮನ.....!
‘ನೀನೆಂದರೆ ಇಷ್ಟ ‘ ಎಂದು ಹೇಳಲು ತವಕಾಡಿತೀ ಮನ
ತವಕದ ನೋವನರಿತ ಅವಳ ಮನ, ಏನೂ ಹೇಳದೆ ಹೋದರೂ
ಏನೋ ಮಹತ್ ಸಾಧಿಸಿದ ಧನ್ಯತಾ ಭಾವ ಈ ಮನಕ್ಕೆ.....!
No comments:
Post a Comment