Total Pageviews

Monday, 10 October 2011

ಅವರಿವರ ನಡುವೆ ಪ್ರೇಮ ಕವನ


ಅತ್ತ ಉರಿದುರಿದು ತಣ್ಣಗಾದ ಕೆಂಪಗಾದ ಅವನು
ಇತ್ತ ಸಂಜೆ ಪೂರ್ಣವಾಗಿ ಚೆಂದವಾಗಿ ವೆಷ್ಯೇಯಂತೆ ವಿಹಾರ ಹೊರಟ ಇವನು
ಅವನೋ ಲೋಕದ ಚರಾಚರಗಳಿಗೆ ಸಂಜೀವಿನಿ
ಇವನೋ ನಿರ್ಜೀವ ಜೀವಗಳ ಸರಸ-ಸಲ್ಲಾಪಗಳನ್ನುತ್ತುಂಗಕ್ಕೇರಿಸುವ ಮಾಯಾ ಮೋಹಿನಿ

ಅತ್ತ ಅವನು ಬೀಳುತಿರಲು
ಇತ್ತ ಇವನು ಏಳುತಿರಲು
ನಾ ಬರೆದೆ ಪ್ರೇಮ ಕವನ ಭೂ ತಾಯಿಯ ಎದೆಯ ಮೇಲೆ
ಅಣುಕಿಸಲೆಂಬಂತೆ ಅಳಿಸಿ ಹಾಕಿತದನು ಹೊಯ್ದು ನೀರದರ ಮೇಲೆ

ನೀರ್ ಮಾಡಿದ ಅಕೃತ್ಯಕ್ಕೇ ನಾಲ್ವರೇ ಸಾಕ್ಷಿ
ಅಮ್ಮ(ಭೂತಾಯಿ) ನಾನು ಅವನು ಮತ್ತಿವನು
ಅವನೋ ತಣ್ಣಗಾದವನು  ಉರಿದು ಕೋಪಿಸಿದ
ಇವನೋ ‘ಕಪ್ಪು ಕಲೆ ಸುಂದರ’ ಸುಮ್ಮನಿರದೆ ನಕ್ಕು ಸಂಭ್ರಮಿಸಿದ
ಅಮ್ಮ ಹಣೆ ಚುಂಬಿಸಿ ಮತ್ತೆ ಬರೆಯದನೆಂದು ಕಡ್ಡಿಯಿತ್ತು ಸ್ಪಂದಿಸಿದರೆ

ಈ ಗೊಂದಲಗಳ ಸಂಧಿಯಲ್ಲಿ ನನ್ನ ಭಾವನೆಗಳ ಮೇಲ್ ಸಂಶಯ ಬಂದು
ಮಸುಕಾಗಾದ್ರು ಉಳಿದಿದ್ದ ಪ್ರೇಮ ಕವನ ತಿದ್ದೋಣ ಅಂದ್ರೆ
ಮಳೆರಾಯನೂ ನನ್ನ  ಛೇಡಿಸುವುದೇ.....?

ಜವರಾಯನೂ ನನಗವಕಾಶಕೊಡದೆ.....! 


No comments:

Post a Comment