ಮೂಸಿಯೂ ನೋಡದ ದೇವರಿಗೂ ರಾಶಿ ರಾಶಿ ಅನ್ನ ನೈವೇದ್ಯ,
ದೇವರು ಕೇಳದಿದ್ರೂ ತಂತಮ್ಮ ಬಾಯಿ ಚಪಲಕ್ಕೆ ಮತ್ತೆ ಪ್ರಾಣಿ ನೈವೇದ್ಯ,
ವಾಂತಿ ಬರೋವರೆಗೂ ತಿಂತಿಯಲ್ಲೋ ಹಸಿದವರ ಮುಂದೆ.....!
ನೀನೇಕೆ ನಿಷ್ಠೂರನಾಗಿರುವೆ ಎಲ್ಲಾ ಕಂಡೂ ಕಾಣದಾಂಗೆ.....?
ಜೀವವಿಲ್ಲದ ಚಿತ್ರಪಟಗಳು ಖುಷಿಪಡತಾವೆ ಬಣ್ಣ ಬಣ್ಣದ ಉಡುಪು ತೊಟ್ಟು,
ನೀ ಬೆಚ್ಚಗೆ ಮಲಗಿರುವಿಯಲ್ಲೋ ದಪ್ಪ ದಪ್ಪ ಕಂಬ್ಳಿ ಹೊದ್ದು.....!
ನಿನ್ನಣ್ಣ ತಮ್ಮಂದಿರ ನೋಡಿದರೆ ಬಾರದೆ ನಿನಗೆ ಕರುಣೆ ಇಷ್ಟೂ.....?
ಏಕೆ ಮೂಢನಾಗುತಿರುವೆ ಸಂಪತ್ತು ಕೂಡಿ ಕೂಡಿ ಇಟ್ಟು.....?
ಸೂರುಗಳಿದ್ದರೂ ಸೋರುತಿವೆ ಮಾಳಿಗೆ, ಕೊರೆಯುತಿದೆ ಮೈ,
ಮತ್ತೆ ಸುಡುತಿದೆ ಅದೇ ಸಂಧಿಯಿಂದ ಎಲ್ಲ ಕುಚೇಲರ ನೆತ್ತಿ.
ಅವನಿದ್ದ ಜೋಪಡಿಗೆ ಕೃಷ್ಣನೂ ಹೋದ ಪರಮಾತ್ಮನಾಗಿದ್ದು ಗೆಳೆಯನಾಗಿ.....!
ಇದೆಂಥಾ ಅಸುರತನ ಮೆರೆಯುತ್ತಿದ್ದೀರಿ ಮಾನವನಾಗಿದ್ದೂ ಮಾನವನಾಗಲು.....?
ಏಕೆ ಈ ಹಿಂದೇಟು ಅವರ ಕಷ್ಟ ನಿವಾರಿಸಲು.....?
No comments:
Post a Comment